ಸೋಮವಾರ, ಆಗಸ್ಟ್ 15, 2011

ಅಮೃತಾ ಪ್ರೀತಂ ಕವನ

ಮೈನೆ ಜಬ್ ತೆರಿ ಸೇಜ್
ಪರ್ ಪೈರ್ ರಖ್ಖಾ ಥಾ,
ಮೈ ಏಕ್ ನಹಿ ಥಿ, ದೊ ಥಿ.

ಏಕ್ ಸಮೂಚಿ ಬ್ಯಾಹಿ
ಔರ್ ಏಕ್ ಸಮೂಚಿ ಕಂವಾರಿ.
ತೆರಿ ಭೋಗ್ ಕಿ ಖಾತಿರ್
ಮುಝೆ ಉಸೆ ಕತ್ಲ್ ಕರ್ನಾ ಥಾ
ಮೈನೆ ಕತ್ಲ್ ಕಿಯಾ ಥಾ
ಪರ್ ಜ್ಯೂಂಹಿ ಮೈ ಶೀಶೇ ಕೆ
ಸಾಮನೆ ಆಯೀ,
ವಹ್ ಸಾಮನೆ ಖಡೀಥಿ
ವಹಿ ಜೊ ಅಪ್ನೆ ತರಫಸೆ ಮೈನೆ
ರಾತ್ ಕತ್ಲ್ ಕೀ ಥಿ
ಓ ಖುದಾಯಾ, ಕ್ಯಾ ಸೆಜ್ ಕಾ
ಅಂಧೇರಾ ಬಹುತ್ ಗಾಢಾ ಥಾ?
ಮುಝೇ ಕಿಸೇ ಕತ್ಲ ಕರನಾ ಥಾ
ಕಿಸೇ ಕತ್ಲ ಕರ್ ಭೈಠಿ.
ಕನ್ಯೆ
ಮೊದಲ ರಾತ್ರಿಯ ನಿನ್ನ ಮಧುಮಂಚಕೆ
ಬಂದಾಗ ನಾ ಒಬ್ಬಳಾಗಿರಲಿಲ್ಲ
ಎರಡಾಗಿದ್ದೆ.
ಒಬ್ಬ ಸಂಪೂರ್ಣ ವಿವಾಹಿತೆ
ಒಬ್ಬ ಸಂಪೂರ್ಣ ಕನ್ಯೆ.
ನಿನ್ನ ಭೋಗಕ್ಕಾಗಿ ನಾನು ಆಕೆಯನ್ನು
ಕೊಲ್ಲಬೇಕಿತ್ತು. ಕೊಂದೆ ಕೂಡಾ.
ಆದರೆ ನಾನು ಕನ್ನಡಿಯ
ಎದುರಿಸಿದಾಕ್ಷಣ
ಆಕೆ ಎದುರಿಗೆ ಬಂದಳು
ಅವಳೇ, ನಾನು ನಾನಾಗಿಯೇ
ರಾತ್ರಿ ಕೊಲೆಗೈದೆನಲ್ಲಾ ಅವಳೇ
ಓ ದೇವರೇ, ಮಧುಮಂಚದ ಕತ್ತಲು
ಅಷ್ಟು ದಟ್ಟವಾಗಿತ್ತೇ
ಯಾರ ಕೊಲೆ ಮಾಡಬೇಕಿತ್ತು ನಾನು
ಕೊಂದೆ ಯಾರನ್ನ?

ಅನುವಾದ  :  
-ಶ್ರೀಕಾಂತ್ ಪ್ರಭು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ